Posts

Showing posts from December, 2024

ಮಅದಿನ್ ಐಕನ್

 ಕೇರಳದ ಮಲಪ್ಪುರಂ ಜಿಲ್ಲೆಯ ಸ್ವಲಾತ್ ನಗರ ಎಂಬಲ್ಲಿ ಸಯ್ಯಿದ್ ಖಲೀಲ್ ಅಲ್ ಬುಖಾರಿ ರವರ ಪ್ರಶಸ್ತ ಸಂಸ್ಥೆಯಾಗಿದೆ ಮಅದಿನ್ ಅಕಾಡಮಿ. ಅನಾಥ ನಿರ್ಗತಿಕ ಮಕ್ಕಳಿಗೆ ಊಟ, ವಸತಿ, ವಿದ್ಯಾಭ್ಯಾಸ ಉಚಿತವಾಗಿ ನೀಡುವುದರ ಜೊತೆ ಅಂಧರಿಗೆ ಮತ್ತು ಅಂಗವಿಕಲರಿಗೆ ವಿಶೇಷ ವಿದ್ಯಾಭ್ಯಾಸ ರೀತಿಯನ್ನು ನೀಡುತ್ತಿದೆ.  ಪ್ರತಿ ವರ್ಷ ನಡೆಯುವ "ಮಅದಿನ್ ಐಕನ್" ಈ ವರ್ಷ ಡಿಸೆಂಬರ್ 24 ,25 ದಿನಾಂಕದಲ್ಲಿ ನಡೆಯಿತು. ಈ ಎರಡು ದಿನಗಳಲ್ಲಿ ನಡೆದ "ಮಅದಿನ್ ಐಕನ್" ಕಾರ್ಯಕ್ರಮದಲ್ಲಿ ವಿನೀತನಿಗೆ ಭಾಗವಹಿಸಲು ಸಾಧ್ಯವಾಯಿತು. ಪ್ರಮುಖ ವ್ಯಕ್ತಿಗಳಿಂದ ಹಲವು ವಿಷಯಗಳಲ್ಲಿ ಆಸಕ್ತಿ ಮೂಡಿಸುವಂತಹ ತರಗತಿ ಇಲ್ಲಿ ಸಿಕ್ಕಿತು. ಈ ವರ್ಷದ "ಮಅದಿನ್ ಐಕನ್" ನ ಒಂದು ಪ್ರತ್ಯೇಕತೆ ಏನೆಂದರೆ, ಕಳೆದ ವರ್ಷದ ವರೆಗೆ ನಡೆದ "ಮಅದಿನ್ ಐಕನ್" ಕಾರ್ಯಕ್ರಮದಲ್ಲಿ ಕೇರಳದ ಪ್ರಮುಖ ವ್ಯಕ್ತಿಗಳಿಂದ ವಿವಿಧ ರೀತಿಯ ತರಗತಿಗಳು ನಡೆಯುತ್ತಿತ್ತು. ಆದರೆ ಈ ವರ್ಷ ಮಅದಿನ್ ನಲ್ಲಿ ಕಲಿಯುವ ಕರ್ನಾಟಕ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ಕರ್ನಾಟಕದ ಪ್ರಮುಖ ವ್ಯಕ್ತಿಗಳಿಂದ ತರಗತಿ ಒದಗಿಸಲು ಸಾಧ್ಯವಾಯಿತು. ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್, ಜಿ ಎಂ ಕಾಮಿಲ್ ಸಖಾಫಿ ಮತ್ತು ಸುಫ್ಯಾನ್ ಸಖಾಫಿ ಈ ವರ್ಷದ "ಮಅದಿನ್ ಐಕನ್" ನ ಅತಿಥಿಗಳಾಗಿ ಬಂದಿದ್ದಾರೆ.  ಸಂಸ್ಥೆಯ ಶಿಲ್ಪಿ ಬದ್ರುಸ್ಸಾದಾತ್ ಸಯ್ಯಿದ್ ಖಲೀಲ್ ತಙಳರನ್ನು ಹತ್ತಿರದಿಂದ...

ಅನ್ವರ್ ಉಸ್ತಾದ್

 ಕಾಸರಗೋಡಿನ ಆರಿಕ್ಕಾಡಿ ಎಂಬಲ್ಲಿ ಸ್ನೇಹಿತನ ಮದುವೆಗೆ ಹೋಗಿದ್ದೆ. ಅಲ್ಲಿಂದ ಮರಳುವಾಗ ಶೈಖುನಾ ತಾಜುಶ್ಶರೀಅಃ ಅಲಿ ಕುಂಞಿ ಉಸ್ತಾದರ ಮಖಾಂ ಝಿಯಾರತ್ ಮಾಡಲು ಹೋದೆ. ಪ್ರವಾದಿ ﷺ ರನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿದ ಮಹಾನ್ ವ್ಯಕ್ತಿ. ಪ್ರವಾದಿ ﷺ ರು ಹೇಳಿಕೊಟ್ಟ ಅದೇ ರೂಪದಲ್ಲಿರುವ ಜೀವನ ಶೈಲಿ. ಉಸ್ತಾದರ ಜೀವಂತಕಾಲದಲ್ಲಿ ಉಸ್ತಾದರನ್ನು ನೇರ ಕಂಡು ಆಶೀರ್ವಾದ ಪಡೆಯಲು ಭಾಗ್ಯ ಲಭಿಸಿದೆ ಅಲ್ ಹಂದು ಲಿಲ್ಲಾಹ್. ಉಸ್ತಾದರ ಬಳಿ ನಿಂತು ಫಾತಿಹಾ ಸೂರತ್ ಓದಿ ಪ್ರಾರ್ಥಿಸಿದಾಗ ಮನಸ್ಸಿಗೆ ಎಲ್ಲಿಲ್ಲದ ಸಮಾಧಾನ.  ಅಲ್ಲಿ ಝಿಯಾರತ್ ಮುಗಿಸಿ ಕೂಡಲೇ ಅಲಿ ಕುಂಞಿ ಉಸ್ತಾದರ ಸುಪುತ್ರ ಅನ್ವರ್ ಅಲಿ ಸಖಾಫಿ ಉಸ್ತಾರಿಗೆ ಫೋನ್ ಮಾಡಿದೆ. ಜಾಮಿಯಾ ಸಅದಿಯಾ ಅರಬಿಯಾ ಹಿಫ್ಝುಲ್ ಖುರ್ಆನ್ ಕಾಲೇಜಿನಲ್ಲಿ ಉಸ್ತಾದರ ಶಿಷ್ಯನಾಗಲು ಭಾಗ್ಯ ಲಭಿಸಿತ್ತು. ಉಸ್ತಾದರನ್ನು ಮಾತನಾಡಿಸಲು ಪಕ್ಕದಲ್ಲೇ ಇದ್ದ ಲತೀಫಿಯ ಸ್ಥಾಪನೆಗೆ ಹೊರಟೆ. (ಅನ್ವರ್ ಉಸ್ತಾದ್ ಈಗ ಅಲ್ಲಿ ಸೇವೆ ಸಲ್ಲಿಸುವುದು) ಉಸ್ತಾದರನ್ನು ಕಂಡು ಮಾತನಾಡಿಸಿದಾಗ ತುಂಬಾ ಸಂತೋಷವಾಯಿತು. ಹೆಗಲಿಗೆ ಕೈ ಹಾಕಿ ಸ್ನೇಹಿತನ ಹಾಗೆ ಮಾತನಾಡಿಸಿದರು. ಅಲ್ಲಿಂದ ನೇರ ಉಸ್ತಾದರ ಮನೆಗೆ ಕರೆದುಕೊಂಡು ಹೋಗಿ ಕಾಫಿ ಕುಡಿಸಿದರು. ತುಂಬಾ ವಿಶೇಷಗಳು ಕೇಳಿ ಪ್ರಾರ್ಥಿಸಿ ಕೊಟ್ಟರು.  ನಮಗೆ ವಿದ್ಯೆ ಕಲಿಸಿದ ಗುರುಗಳನ್ನು ಕಲಿಕೆಯ ನಂತರ ಮತ್ತೊಮ್ಮೆ ನೇರ ಕಂಡು ಮಾತನಾಡಿಸುವಾಗ ಏನೋ...ಎಲ್ಲಿಲ್ಲದ ಸಂತೋಷ. ಒ...

ಉಸ್ಥಾದರನ್ನು ಭೇಟಿಯಾದಾಗ

ಮೊನ್ನೆ (14-12-2024) ಸ್ನೇಹಿತನ ತಂಗಿಯ ಮದುವೆಗೆ ಹೋಗಿದ್ದೆ. ಅಲ್ಲಿ ನನಗೆ ಮುಜಮ್ಮಇನಲ್ಲಿ ಮೊದಲು ಕಲಿಸಿದ ನೌಫಲ್ ನಈಮಿ ಉಸ್ತಾದರು ಸಿಕ್ಕಿದರು. ನಮ್ಮನ್ನು ಕಂಡಾಗ ನಗುಮುಖದಿಂದ ಕೈಕೊಟ್ಟು ಸ್ವೀಕರಿಸಿದರು. ಎಲ್ಲಾ ವಿಶೇಷಗಳು ಕೇಳಿ ತಿಳಿದ ಮೇಲೆ, ಭವಿಷ್ಯದ ಕುರಿತು ಸ್ವಲ್ಪ ವಿಷಯ ಹೇಳಿ ಕೊಟ್ಟರು. "ನಾವು ಏನೇ ಮಾಡಿದರೂ ಕೂಡಾ ಜೀವಿಸಲು ಬೇಕಾಗಿ ಏನಾದರೂ ಒಂದು ಸಾಮರ್ಥ್ಯವನ್ನು ಕಲಿತಿರಬೇಕು. ಎಲ್ಲಾ ವಿಷಯಗಳಲ್ಲೂ ಅಲ್ಪ ಸ್ವಲ್ಪ ಜ್ಞಾನವಾದರೂ ಪಡೆದಿರಬೇಕು. ಏನೇ ಆದರೂ ಅದು ನಮ್ಮಿಂದ ಸಾಧ್ಯವಿಲ್ಲ ಎಂಬ ತೊಂದರೆ ಬರಬಾರದು". ಹೀಗೆ ಹಲವು ಸದುಪದೇಶಗಳು ಹೇಳಿಕೊಟ್ಟರು. ಅಲ್ ಹಂದುಲಿಲ್ಲಾಹ್ ಸಂತೋಷವಾಯಿತು. ನಮ್ಮಿಂದ ದೂರ ಸರಿದರೂ ಕೂಡಾ ನಮ್ಮ ವಿಜಯದ ಕುರಿತು ಯೋಚಿಸುತ್ತಿರುವ ಉಸ್ತಾದರುಗಳು ನಮಗಿದ್ದಾರೆ ಎಂಬ ಧೈರ್ಯ ನಮಗಿದೆ. ಅಲ್ಲಾಹು ನಮ್ಮ ಎಲ್ಲಾ ಉಸ್ತಾದರುಗಳಿಗೆ ದೀರ್ಘಾಯುಷ್ಯ ನೀಡಿ ಅನುಗ್ರಹಿಸಲಿ ಆಮೀನ್