ಮಅದಿನ್ ಐಕನ್
ಕೇರಳದ ಮಲಪ್ಪುರಂ ಜಿಲ್ಲೆಯ ಸ್ವಲಾತ್ ನಗರ ಎಂಬಲ್ಲಿ ಸಯ್ಯಿದ್ ಖಲೀಲ್ ಅಲ್ ಬುಖಾರಿ ರವರ ಪ್ರಶಸ್ತ ಸಂಸ್ಥೆಯಾಗಿದೆ ಮಅದಿನ್ ಅಕಾಡಮಿ. ಅನಾಥ ನಿರ್ಗತಿಕ ಮಕ್ಕಳಿಗೆ ಊಟ, ವಸತಿ, ವಿದ್ಯಾಭ್ಯಾಸ ಉಚಿತವಾಗಿ ನೀಡುವುದರ ಜೊತೆ ಅಂಧರಿಗೆ ಮತ್ತು ಅಂಗವಿಕಲರಿಗೆ ವಿಶೇಷ ವಿದ್ಯಾಭ್ಯಾಸ ರೀತಿಯನ್ನು ನೀಡುತ್ತಿದೆ. ಪ್ರತಿ ವರ್ಷ ನಡೆಯುವ "ಮಅದಿನ್ ಐಕನ್" ಈ ವರ್ಷ ಡಿಸೆಂಬರ್ 24 ,25 ದಿನಾಂಕದಲ್ಲಿ ನಡೆಯಿತು. ಈ ಎರಡು ದಿನಗಳಲ್ಲಿ ನಡೆದ "ಮಅದಿನ್ ಐಕನ್" ಕಾರ್ಯಕ್ರಮದಲ್ಲಿ ವಿನೀತನಿಗೆ ಭಾಗವಹಿಸಲು ಸಾಧ್ಯವಾಯಿತು. ಪ್ರಮುಖ ವ್ಯಕ್ತಿಗಳಿಂದ ಹಲವು ವಿಷಯಗಳಲ್ಲಿ ಆಸಕ್ತಿ ಮೂಡಿಸುವಂತಹ ತರಗತಿ ಇಲ್ಲಿ ಸಿಕ್ಕಿತು. ಈ ವರ್ಷದ "ಮಅದಿನ್ ಐಕನ್" ನ ಒಂದು ಪ್ರತ್ಯೇಕತೆ ಏನೆಂದರೆ, ಕಳೆದ ವರ್ಷದ ವರೆಗೆ ನಡೆದ "ಮಅದಿನ್ ಐಕನ್" ಕಾರ್ಯಕ್ರಮದಲ್ಲಿ ಕೇರಳದ ಪ್ರಮುಖ ವ್ಯಕ್ತಿಗಳಿಂದ ವಿವಿಧ ರೀತಿಯ ತರಗತಿಗಳು ನಡೆಯುತ್ತಿತ್ತು. ಆದರೆ ಈ ವರ್ಷ ಮಅದಿನ್ ನಲ್ಲಿ ಕಲಿಯುವ ಕರ್ನಾಟಕ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ಕರ್ನಾಟಕದ ಪ್ರಮುಖ ವ್ಯಕ್ತಿಗಳಿಂದ ತರಗತಿ ಒದಗಿಸಲು ಸಾಧ್ಯವಾಯಿತು. ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್, ಜಿ ಎಂ ಕಾಮಿಲ್ ಸಖಾಫಿ ಮತ್ತು ಸುಫ್ಯಾನ್ ಸಖಾಫಿ ಈ ವರ್ಷದ "ಮಅದಿನ್ ಐಕನ್" ನ ಅತಿಥಿಗಳಾಗಿ ಬಂದಿದ್ದಾರೆ. ಸಂಸ್ಥೆಯ ಶಿಲ್ಪಿ ಬದ್ರುಸ್ಸಾದಾತ್ ಸಯ್ಯಿದ್ ಖಲೀಲ್ ತಙಳರನ್ನು ಹತ್ತಿರದಿಂದ...