ಮಾಲಿಕ್ ದೀನಾರ್
ಮಾಲಿಕ್ ದೀನಾರ್ ______________________________ ಇಂದು ಸುಬ್-ಹ್ ನಮಾಝಿಗೆ ಕಾಸರಗೋಡಿನ ಮಾಲಿಕ್ ದೀನಾರ್ ಮಸೀದಿಯಲ್ಲಿದ್ದೆ. ಅನೇಕ ಕರಾಮತುಗಳ ಮೂಲಕ ಜನಮನಸ್ಸಿನಲ್ಲಿ ಸ್ಥಾನ ಪಡೆದ ಮಹಾತ್ಮರಾದ ಮಾಲಿಕ್ ದೀನಾರ್ (ರ) ರವರ ಮಖ್ಬರ ಈ ಮಸೀದಿಯ ಬಲ ಭಾಗದಲ್ಲಿದ್ದು, ಮಹಾನರ ಝಿಯಾರತ್ ಮಾಡಿ ನಮ್ಮ ಯಾತ್ರೆ ಮುಂದುವರೆಸಿದೆವು. ಇಸ್ಲಾಂ ಧರ್ಮ ಪ್ರಚಾರಕ್ಕಾಗಿ ಪ್ರವಾದಿ ﷺ ರ ಕಾಲದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ತಳಂಗರ ಎಂಬ ಗ್ರಾಮಕ್ಕೆ ಕಡಲು ದಾರಿಯ ಮೂಲಕ ಬಂದ ಮಹಾನರಾಗಿದ್ದಾರೆ ಮಾಲಿಕ್ ದೀನಾರ್ (ರ). ಪ್ರವಾದಿ ﷺ ರು ತೋರಿಸಿ ಕೊಟ್ಟ ಅದೇ ರೀತಿಯಲ್ಲಿ ಅವರು ಇಸ್ಲಾಂ ಧರ್ಮವನ್ನು ಜನರಿಗೆ ತೋರಿಸಿಕೊಟ್ಟರು. ಮೊತ್ತ ಮೊದಲು ಕೇರಳಕ್ಕೆ ಬಂದಾಗ ಅಪ್ಪು ಎಂಬ ಹಿಂದೂ ಧರ್ಮದ ಓರ್ವ ವ್ಯಕ್ತಿ ತೆಂಗಿನ ನೀರು ಕೊಟ್ಟು ಸ್ವೀಕರಿಸಿದಾಗ " ಇದು ಯಾರ ಜಮೀನಿನ ತೆಂಗಿನ ಕಾಯಿ ? ಆ ವ್ಯಕ್ತಿಯ ಅನುಮತಿಯೊಂದಿಗೆ ಕೊಡುವುದೇ ?? " ಎಂದು ಮಾಲಿಕ್ ದೀನಾರ್ (ರ) ಕೇಳಿದಾಗ ಇಸ್ಲಾಮಿನ ಮೂಲಭೂತ ನಿಯಮಗಳ ಕುರಿತು ಆ ವ್ಯಕ್ತಿಗೆ ಅರ್ಥೈಸಲು ಸಾಧ್ಯವಾಯಿತು. ಅನುಮತಿಯಿಲ್ಲದೆ ಏನನ್ನೂ ತಿನ್ನಬಾರದು - ಕುಡಿಯಬಾರದು ಎಂಬ ಇಸ್ಲಾಮಿನ ನೈಜ ಸಂದೇಶ ಆ ಒಂದು ಪ್ರಶ್ನೆಯಲ್ಲಿತ್ತು. ಅದರ ನಂತರ ಆ ವ್ಯಕ್ತಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ಚರಿತ್ರೆಯಲ್ಲಿ ಕಾಣಬಹುದು. ಹೀಗೆ ಅನೇಕ ಜನರನ್ನು ಸತ್ಯ ದಾರಿಗೆ ತಂದ ಓರ್ವ ಮಹಾನ್ ವಿದ್ವಾಂಸರಾಗಿದ್ದಾರೆ ಮಾ...